ದಾರಿ ಬಿಡಿರೋ ಇವನಿಗೆ, ಉಸಿರು ಕಟ್ಟಬೇಡಿ, ದಾರಿ ಕಟ್ಟಬೇಡಿ
ಹುಲಿಕರಡಿಗಳಂತೆ ಹೆದರಿಸಬೇಡಿ
ಮರಿಗಿಳಿಯಂತಿವನು
ಕತ್ತಿ ಬಡಿಗೆಗಳನಾಡಿಸಬೇಡಿ
ಬಳ್ಳಿ ಚಿಗುರಿನಂತಿವನು
ಮುಳ್ಳು ಕಲ್ಲುಗಳ ಹರವಬೇಡಿ,
ಹೂಪಾದ ಇವನವು
ಕೋಲಾಹಲದಲೆಯಪ್ಪಳಿಸಬೇಡಿ
ಆಶ್ರಮ ಶಾಂತಿಯಲ್ಲರಳಿದ ಕಿವಿಯಿವನವು
ಉರಿಮಾರಿಯ ಮೆರವಣಿಗೆ ಮಾಡಬೇಡಿ,
ಮರಣದಾಚೆ ನೋಡಿ ಬಂದವನಿವನು
ಅಸಂಬದ್ಧ ಪ್ರೇತಕುಣಿತ ಕುಣಿಯಬೇಡಿ
ಸಹಜನಾಟ್ಯದೊಲೆದಾಡಿದ ಮೈ ಇವನದು
ಅಸಂಗತ ಸಂಗೀತವನರಚಬೇಡಿ,
ದಿವ್ಯಗಾನಕೆ ದನಿಗೂಡಿಸಿ ಹದ್ದಾದವನಿವನು
ನೂರಾರು ಹಗ್ಗಗಳಿಂದ ಬಂಧಿಸಬೇಡಿ,
ಸ್ವಚ್ಛಂದ ಲೀಲೆ ಇವನದು
ಮಾತಿನ ಮೋಡಿಯಲ್ಲಿ ಮುಚ್ಚಬೇಡಿ,
ಮೌನದ ಗವಿಯ ಹೊಕ್ಕು ಬಂದವನಿವನು
ಹೆಣ್ಣಕುಣಿಸಿ ನೋಟ ಕೂಟ ಕಟಿಸೂತ್ರಗಳಿಂದ ಕಟ್ಟಬೇಡಿ
ಬೇರಿನ ಬಿಳಿಹೂವ ನೆತ್ತಿಗೇರಿಸಿ ಮೂಸಿ
ಬಳ್ಳಿ ಬಂಧಕೆಡೆಯಾಗದೆ ಬಯಲಾಡುವನಿವನು
ಇವನು ಪರದವನಾದರೂ ಪರಕೀಯನಲ್ಲ
ನಮ್ಮವನೇ, ದಾರಿ ಬಿಡಿ
ನಿಮ್ಮ ಹತ್ತಿಕ್ಕಿ ಭಂಗಿಸಿ ಸ್ವಂತ ದಾರಿ ಬಿಡಿಸಿಕೊಳ್ಳುವವರೆಗೆ
ಬೇಡ ಬಿಡಿ
*****
Related Post
ಸಣ್ಣ ಕತೆ
-
ಒಂಟಿ ತೆಪ್ಪ
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
-
ದೇವರು ಮತ್ತು ಅಪಘಾತ
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…